Learn Mangalore Konkani - Lesson 35

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of Aravinda VK's ASCII to Unicode converter and the Kannada typing module at HiGopi.com, I've now redone lesson 35 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ. 

ಹರಿಹರೇಶ್ವರರವರೇ, ನಮಸ್ಕಾರಗಳು. ಹೇಗಿದ್ದೀರಿ?
ಹರಿಹರೇಶ್ವರಾಂಕ್ ನಮಸ್ಕಾರು. ಕಶ್ಶಿ ಅಸ್ಸಾಂಚಿ ತುಮಿ?

ನಮಸ್ಕಾರ ನವೀನ, ನಾನು ದೇವರ ದಯೆಯಿಂದ ಚೆನ್ನಾಗಿದ್ದೇನೆ. ನೀನು ಹೇಗಿದ್ದೀಯಾ?
ನಮಸ್ಕಾರು ನವೀನಾಕ್. ಹಾಂವ್ ದ್ಯಾವಾಲೆ ದಯೇಂತು ಆರಾಮೆರಿ ಅಸ್ಸ. ತು ಕಶ್ಶಿ ಅಸ್ಸ್?

ನಾನೂ ದೇವರ ದಯೆಯಿಂದ ಚೆನ್ನಾಗಿದ್ದೇನೆ. ಏನು ಬಹಳ ಅಪರೂಪ?
ಹಂವೈಂ ದ್ಯಾವಾಲೆ ದಯೇಂತು ಆರಾಮೆರಿ ಅಸ್ಸ್. ಇತ್ತೆ ಭಾರೀ ಅಪರೂಪ್?

ಅದು ಹೌದು. ನಿನಗೆ ತಿಳಿಸಲು ಮರೆತಿದ್ದೆನು. ಮುಂದಿನ ಶನಿವಾರ ಅಗ್ರಹಾರದಲ್ಲಿರುವ ಶ್ರೀ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ನನ್ನ ಆರೋಗ್ಯ ಭಾಗ್ಯ ಎನ್ನುವ ಪುಸ್ತಕದ ಬಿಡುಗಡೆಯ ಕಾರ್ಯಕ್ರಮವಿದೆ. ನೀನು ನಿನ್ನ ಗೆಳೆಯರೊಂದಿಗೆ ಬರಲೇಬೇಕು.
ತೇ ವೈ. ತುಕ್ಕ ಸಂಗುಕ್ ವಿಸರ್ಲೆ. ಎವ್ಚೆ ಶನಿವಾರ ಅಗ್ರಹಾರಾಂತು ಅಶ್ಚೆ ಶ್ರೀ ರಾಜೇಂದ್ರ ಕಲ್ಯಾಣ ಮಂಟಪೇಂತು ಸಕಾಣಿ ಇಕ್ರ ಗಂಟೇಕ್ ಮೆಗೆಲೆ ಆರೋಗ್ಯ ಭಾಗ್ಯ ಮೊಣ್ಚೆ ಬುಕ್ಕಾ ಬಿಡುಗಡೆ ಕಾರ್ಯಕ್ರಮ ಅಸ್ಸ್. ತು ತುಗೆಲೆ ಫ್ರೆಂಡ್ಸಾಲೊಟ್ಟು ಎವುಕಾಚಿ.

ಓಹ್ ಹೌದಾ? ವಿಷಯವನ್ನು ಕೇಳಿ ತುಂಬಾ ಸಂತೋಷವಾಯಿತು. ಅಂದ ಹಾಗೆ ಪುಸ್ತಕ ಬಿಡುಗಡೆಗೆ ಅತಿಥಿಗಳಾಗಿ ಯಾರು ಆಗಮಿಸುತ್ತಿದ್ದಾರೆ?
ಓ ವೈವೇ? ವಿಷಯು ಐಕುನು ಮಸ್ತ್ ಖುಶಿ ಜಲ್ಲೆ. ಸಂಗಿಲ್‍ಮಣ್ಕೆ ಬುಕ್ಕಾಚೆ ಬಿಡುಗಡೇಕ್ ಸೊಯಿರೆ ಕೋಣ್ ಎತ್ತಾಸ್?

ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿರುವ ಶ್ರೀ ವಿಶ್ವೇಶ್ವರ ಭಟ್ಟರು ಹಾಗೂ ಕನ್ನಡ ಸಾಹಿತ್ಯ ಲೋಕದ ಪಂಡಿತರಾದ ದಿಗ್ಗಜರುಗಳು ಅತಿಥಿಗಳಾಗಿ ಬರುತ್ತಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆಯ ಮುನ್ನವೇ ನೀವು ಬರಬೇಕು. ಕಾರ್ಯಕ್ರಮಕ್ಕೆ ಕೆಲವು ಸ್ವಯಂಸೇವಕರು ಬೇಕು. ಹಾಗಾಗಿ ನಿನ್ನ ಸಹಕಾರ ನನಗೆ ಬೇಕು.
ವಿಜಯ ಕರ್ನಾಟಕ ಪೇಪರಾಚೆ ಸಂಪಾದಕು ಶ್ರೀ ವಿಶ್ವೇಶ್ವರ ಭಟ್ಟು ಅನಿ ಕನ್ನಡ ಸಾಹಿತ್ಯ ಲೋಕಾಚೆ ಹೋಡ್‍ಹೋಡ್ ಜನ್ ಸೊಯಿರೆ ಜಾವ್ನು ಎತ್ತಾಸಂಚಿ. ಕಾರ್ಯಕ್ರಮು ಸೂರು ಜವ್ಚೆ ಏಕ್ ಗಂಟೇಚೆ ಫೂಡೇಚಿ ತುಮಿ ಎವ್ಕ. ಕಾರ್ಯಕ್ರಮಾಕ್ ಎದೇ ವೋಲಂಟೀರ್ಸ್ ಜಾಯಿ. ತಶ್ಶಿ ಜಾವ್ನು ತುಗೆಲೆ ಸಹಕಾರು ಮಕ್ಕ ಜಾಯಿ.

ಖಂಡಿತವಾಗಿಯೂ ಬರುತ್ತೇನೆ. ಕಾರ್ಯಕ್ರಮ ಆರಂಭವಾಗುವ ಎರಡು ಗಂಟೆಯ ಮುಂಚಿತವಾಗಿಯೇ ನಾನು, ರೇವಣ್ಣ ಹಾಗೂ ಮೋಹನರವರನ್ನು ಕರೆದುಕೊಂಡು ಬಂದು ಬಿಡುತ್ತೇನೆ.
ಖಂಡಿತ ಎತ್ತ. ಕಾರ್ಯಕ್ರಮ್ ಸೂರು ಜವ್ಚೆ ದೋನಿ ಗಂಟೇಚೆ ಫೂಡೇಚಿ ಹಾಂವ್, ರೇವಣ್ಣ ಅನಿ ಮೋಹನಾಕ್ ಅಪೊನುಘೇವ್ನು ಏವ್ನು ಸೊಡ್ತ.

ಇನ್ನೊಂದು ವಿಚಾರ. ಗಣಪತಿಯವರನ್ನು ಕರಿ. ನಿನ್ನ ಬಳಿಯೇ ಅವರಿಗೆ ಆಹ್ವಾನ ಪತ್ರಿಕೆಯನ್ನು ಕೊಡಲೇ?
ಅನೇಕ್ ವಿಷಯು. ಗಣಪತಿಕೈ ಅಪೈ. ತುಗೆಲಗ್ಗೀಚಿ ತಕ್ಕ ಇನ್ವಿಟೇಷನ್ ದಿವ್‍ಚ್‍ವೇ?

ನನ್ನ ಬಳಿಯೇ ಕೊಡಿ. ನಾನು ಅವನನ್ನು ಆಹ್ವಾನಿಸುತ್ತೇನೆ. ಆದರೆ ಅವನಿಗೆ ಬರಲು ಸಾಧ್ಯವಾಗಲಿಕ್ಕಿಲ್ಲ.
ಮೆಗೆಲಗ್ಗೀಚಿ ದೀಯಾಂಚಿ. ಹಾಂವ್ ತಕ್ಕ ಅಪೈತ. ಜಲ್ಲ್ಯಾರಿ ತಕ್ಕ ಎವ್ಚ್ಯಾಕ್ ಸಾಧ್ಯ್ ಜಾಯ್ನಾಲೆ.

ಹೀಗೋ? ಯಾಕೆ?
ತಶ್ಶಿವೇ? ಕಸಲ್ಯಾಕ್?

ಕೆಲವು ದಿನಗಳಿಂದ ಅವನ ಆರೋಗ್ಯ ಸರಿ ಇಲ್ಲ.
ಎದೇ ದೀಸು ತುಲ್ಯಾನ್ ತಗೆಲೆ ಆರೋಗ್ಯ್ ಸಮ್ ನಾ.

ಯಾಕೆ? ಏನಾಯಿತು?
ಕಸಲ್ಯಾಕ್? ಕಸಲೆ ಜಲ್ಲೆ?

ತಿಂಡಿ - ತಿನಸುಗಳ ವಿಚಾರದಲ್ಲಿ ಕ್ರಮವು ತಪ್ಪಿದ್ದರಿಂದ ಬಳಲುತ್ತಿದ್ದು, ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾನೆ. ಅವನಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಧ್ಯವಾದರೆ ಅವನನ್ನೂ ಕರೆತರುತ್ತೇನೆ.
ಖಾಣ್ - ಜವ್ಣಾಚೆ ವಿಷಯಾಂತು ಎದೇಚಿ ತಕಡೆಕಡೆ ಜಾವ್ನು ಅತ್ತ ಸುಧಾರ್ಸಿತಾಸ್. ತಕ್ಕ ರೆಶ್ಟಾಚೆ ಅಗತ್ಯ್ ಅಸ್ಸ ಮೋಣು ಡಾಕ್ಟ್ರಾನ್ ಸಂಗ್ಲ. ಸಾಧ್ಯ ಜಲ್ಲೆರಿ ತಕೈ ಅಪೊನುಘೇವ್ನು ಎತ್ತ.

ದೇವರ ಅನುಗ್ರಹದಿಂದ ಗಣಪತಿ ಶೀಘ್ರದಲ್ಲೇ ಗುಣಮುಖನಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಹೊರಡುತ್ತೇನೆ. ನನಗೆ ಇನ್ನೂ ತುಂಬಾ ಕೆಲಸವಿದೆ. ಕಾರ್ಯಕ್ರಮದ ದಿನ ಸಿಗೋಣ.
ದ್ಯಾವಾಲ್ ದಯೇಂತು ಗಣಪತಿ ವಗ್ಗಿ ಹುಷಾರ್ ಜವ್ವೊ ಮೋಣು ಹಾಂವ್ ದ್ಯಾವಾಲಗ್ಗಿ ಮಗ್ತ. ಹಾಂವ್ ಅನಿ ಭಾಯಿಸರ್ತ. ಮಕ್ಕ ಅನಿಕೈ ಮಸ್ತ್ ಕಾಮ್ ಅಸ್ಸ. ಕಾರ್ಯಕ್ರಮಾಚೆ ದೀಸು ಮೆಳ್ಯ.

ಹಾಗೆಯೇ ಆಗಲಿ.
ತಶೀಚಿ ಜವ್ವೊ.

Lesson prepared by: ಸಂದೀಪ್ ಶೆಣೈ, ಮೈಸೂರು

ಮುಂದುವರಿಯಲಿದೆ…

Comments

Popular Posts